
ನಾಗೇಶ ಅಲಿಯಾಸ್ ಅಣ್ಣ ಅವರ ಸಾರಥ್ಯದಲ್ಲಿ ಕುಮಾರಪರ್ವತಾರೋಹಣದ ಕಾರ್ಯಕ್ರಮ ಪಕ್ಕ ಆಯ್ತು. ಬಹಳ ದಿನದ ನಂತರ ನಮ್ಮ ಬಾಯ್ಸ್ ಎಲ್ಲಾ ಸೇರಿ ಒಂದು ಕಡೆ ಹೊರಟಿದ್ವಿ. ಒಟ್ಟು ಹದಿಮೂರು ಜನ.. ನಾಗೇಶ್ ಅಲಿಯಾಸ್ ಅಣ್ಣ, ಅರುಣ್ ಅಲಿಯಾಸ್ ಲಾಲ್, ಸಂದೀಪ್ ಅಲಿಯಾಸ್ ಸ್ಯಾಂಡಿ, ಪೂರ್ಣೇಶ್ ಕಾಲ್ ಮಿ ಎಸ್ ಪೂರ್ಣಿ ಪೂರ್ಣಿ ಗೆಳೆಯ ಹರ್ಷ,ವಿಕ್ರಮ್ ಅಲಿಯಾಸ್ ವಿಕ್ಕಿ,ವಿಕ್ಕಿ ಗೆಳೆಯ ಪ್ರದೀಪ್, ಕಾರ್ವಿ ಅಲಿಯಾಸ್ ಫಾಸ್ಟ್ ಫರ್ನಾಂಡೀಸ್,ವತ್ಸ, ನಾಗಿ ಚಡ್ಡಿ ದೋಸ್ತ್ ಮಂಜ,ಮನು,ಮತ್ತೆ ಆನಂದ್.
ನಮ್ಮ ಯೋಜನೆ ಸೊಮವಾರ ಪೇಟೆಯಿಂದ ಗುಡ್ಡ ಹತ್ತಿ ಅಲ್ಲಿ ಒಂದು ರಾತ್ರಿ ಗುಡಾರ ಹೂಡಿ ಮಾರನೆಯದಿನ ಬೆಳಗ್ಗೆ ಪರ್ವತ ಅವಹರಣ ಮಾಡೋದು. ಶುಕ್ರವಾರ ಬೇಗ ಕಛೇರಿಯಿಂದ ಬಂದು ಯಾತ್ರೆಯ ತಯಾರಿ ಮಾಡಿದ್ದಾಯ್ತು. ರಾತ್ರಿ ೧೧ ಘಂಟೆಗೆ ರಾಜ(ನಾಗರಾಜ ;-)) ಹಂಸದಲ್ಲಿ ಕೆಂಪೇಗೌಡ ವಾಹನ ನಿಲ್ದಾಣದಿಂದ ನಮ್ಮ ಪ್ರಯಾಣ ಶುರು ಆಯ್ತು. ನಾನು (ದುರ್) ಅದೃಷ್ಟವಶಾತ್ ನಾನು ನಾಗಿ ಒಂದೇ ಸೀಟು. ನಮಗೆ ಬ್ಲೇಡ್ ಹಾಕೋಕ್ಕೆ ಟಾಪಿಕ್ ಬೇಕಾಗಿಲ್ಲ. ಹಂಗೇ ಅದೂ ಇದೂ ಮಾತಾಡ್ಕೊಂಡು ಮಲ್ಕೊಳ್ಳೋಷ್ಟರಲ್ಲಿ ೧.೩೦. ಬಸ್ ಚೆನ್ನರಾಯ ಪಟ್ಟಣ ಮುಟ್ಟಿದ ಹೊತ್ತಿಗೆ ಮಂಜನ ಕಾಲ್ ಬಂತು, ತೀರ್ಥ ಹಿಡ್ಕೊಂಡು ಹೊಳೇನರಸೀಪುರದಲ್ಲಿ ಕಾಯ್ತಾ ಇದೀನಿ ಅಂತ( ಚುನಾವಣೆಯ ಕೃಪೆಯಿಂದ ಬೆಂಗ್ಳೂರಿನ ಎಲ್ಲಾ ತಿರ್ಥ ವಿತರಣಾ ಕೇಂದ್ರವನ್ನೂ ಮುಚ್ಚಲಾಗಿತ್ತು).ನಾವು ಮುಂಗಡ ಚೀಟಿ ಮಾಡ್ಸಿದ್ದು ೧೧ ಜನಕ್ಕೆ ಈಗ ಇಬ್ರನ್ನ ಅಡ್ಜಸ್ಟ್ ಮಾಡ್ಬೇಕಿತ್ತು. ಹಂಗೂ ಹಿಂಗೂ ಸೀಟ್ ಅಡ್ಜಸ್ಟ್ ಮಾಡ್ಕೊಂಡು ಬೆಳಗ್ಗೆ ೬ ಘಂಟೆ ಅಷ್ಟೊತ್ತಿಗೆ ಸೋಮವಾರ ಪೇಟೆ ಸೇರ್ಕೊಂಡ್ವಿ. ಇನ್ನಾ ಲಾಲ್ ಮತ್ತೆ ವತ್ಸ ಬರ್ಬೇಕಿತ್ತು. ಅವರ ಬಸ್ ಬಂದಾಗ ೭ ಘಂಟೆ.


